ವಿಸ್ಮಯ

ಯಾರೋ ಬರೆದ ಕವನ
ಕಾಡಿತ್ತು ಎಡೆಬಿಡೆದೆನ್ನ ಮನ
ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ
ಬೆನ್ನು ಹತ್ತಿದ ನಕ್ಷತ್ರಿಕನಂತೆ
ಕಣ್ಣಾಡಿಸಿದೆ ಅರ್ಥವಾಗಲಿಲ್ಲ
ನವ್ಯವೋ ನವೋದಯವೋ
ಏನೋ ತೋಚಿದ್ದು ಗೀಚಿದ್ದು
ಭಟ್ಟಿ ಇಳಿಸಿದ್ದಾರೆ.

ಓದಿದೆ ಒಂದಲ್ಲ ಹತ್ತಾರು ಸಲ
ಜ್ಞಾನ ಚಕ್ಷುಗಳಿಂದ
ಪದಗಳ ಪದರವ
ನಯವಾಗಿ ಬಿಡಿಸಿದೆ.
ಅಂಟು ಅಂಟು ಬ್ರಹ್ಮಗಂಟು
ಸಾಮರಸ್ಯದ ಸವಿನಂಟು
ಒಳಹೊಕ್ಕಾಗ ವಿಸ್ಮಯ
ಶಬ್ದಲಂಕಾರದ ಚಾತುರ್‍ಯ
ಅದ್ಭುತ ಮಾಯಾಜಾಲ
ಕಳಿತ ಹೊನ್ನಿನ ಫಲ
ಒಂದೊಂದರಲ್ಲಿ ಅದೇನು ಅರ್‍ಥ
ಭಾವಾರ್‍ಥ ಗೂಢಾರ್‍ಥ
ಬೆರಗಾದೆ ಬಳಸಿದ ರೀತಿಗೆ
ಪದಗಳಿಂದ ಪದಗಳು
ಪದಗಳಲ್ಲಿ ಪದಗಳು
ಪದ್ಯವಾದದ್ದಾದರೂ ಹೇಗೆ?
ಬಾಯಿಮಾತಿನ ಮಾತಲ್ಲಿ ಬಿಡಿ
ಕಡಲ ಮಂಥನದಿಂದ
ಅಮೃತ ಹೊರ ಹೊಮ್ಮಿದಂತೆ
ಹೃದಯಾಂತರಾಳದ ಭಾವ
ಚಿಲುಮೆ ಚಿಮ್ಮಿದಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ
Next post ಮಾವು ಬಾಳೆ ತೆಂಗು ಹಲಸು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys